ಸೋಮವಾರ, ಜುಲೈ 4, 2016

ಹೃದಯ ಹಾಡಿತು


  ಅಂಬರೀಶ್ ಅಭಿನಯದ ಒಂದು ಸುಂದರ ಪ್ರೇಮ ಕಥೆ ಒಳಗೊಂಡ ಚಿತ್ರ ಹೃದಯ ಹಾಡಿತು. ತ್ರಿಕೋನ ಪ್ರೇಮ ಕಥೆಯನ್ನು ಹೊಂದಿರುವ ಈ ಚಿತ್ರ. ಮತ್ತು ಚಿತ್ರದ ಹಾಡುಗಳು ಕನ್ನಡ ಪ್ರೆಕ್ಷಕ ಎಂದಿಗೂ ಮರೆಯದಂತೆ ಮಾಡಿದೆ. ಲವ್ ಜೊತೆಗಿನ ಸೆಂಟಿಮೆಂಟ್ ಚಿತ್ರದ ಹೈಲೈಟ್ ಅಂತಾನೇ ಹೇಳ್ಬೋದು. ಅಂಬರೀಶ್ ಅಭಿನಯದ ಚಿತ್ರಗಳಲ್ಲಿ ಹೃದಯ ಹಾಡಿತು ಚಿತ್ರ ವಿಭಿನ್ನವಾದದ್ದು ಎಂದರೆ ತಪ್ಪಾಗಲಾರದು.
  ಇಂತ ಒಂದು ಕಥೆಯನ್ನು ಚಿತ್ರವನ್ನಾಗಿ ಮಾಡಿದವರು ನಿರ್ದೇಶಕ ಎಂ.ಎಸ್ ರಾಜಶೇಖರ್, ಈ ಚಿತ್ರಕ್ಕೆ ಚಿತ್ರಕಥೆಯನ್ನು ಮಾಡಿದವರು ಕನ್ನಡದ ಹೆಸರಾಂತ ಚಿತ್ರ ಸಾಹಿತಿ ಚಿ ಉದಯಶಂಕರ್, ಕಥೆಯ ವಿವಿಧ ಮಜಲುಗಳನ್ನು ತಮ್ಮ ಕಲ್ಪನಾ ಲೋಕದಲ್ಲಿ ವಿರಮಿಸುತ್ತಾ, ಉದಯಶಂಕರ್ ಚಿತ್ರ ಕಥೆಯನ್ನು ಮಾಡಿದ್ದಾರೆ. ಚಿತ್ರ ನೋಡಿದ ಪ್ರೇಕ್ಷಕನಿಗೆ ಇದರ ಅನುಭವ ಆಗುವುದಂತೂ ಕಂಡಿತ.
 ರೆಬಲ್ ಸ್ಟಾರ್ ಅಂಬರೀಶ್ ನಾಯಕ ನಟನಾಗಿ ಅಬಿನಯಿಸಿದ ಹೃದಯ ಹಾಡಿತು ಚಿತ್ರದಲ್ಲಿ ಮಾಲಶ್ರೀ ಮತ್ತು ಭವ್ಯ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಅಶ್ವತ್ ಕೂಡ ಚಿತ್ರದಲ್ಲಿ ಅಭಿನಯಿಸಿ ತಮ್ಮ ನಟಾನಾ ಕೌಶಲ್ಯವನ್ನು ಮೆರೆದಿದ್ದಾರೆ. ಉಳಿದಂತೆ ಸುಂದರ್ ಕೃಷ್ಣ ಅರಸ್, ಗಿರಿಜಾ ಲೋಕೇಶ್, ಎಂ.ಎಸ್ ಉಮೇಶ್, ಬಾಲರಾಜ್ ಮೊದಲಾದವರನ್ನ ಈ ಚಿತ್ರದಲ್ಲಿ ಕಾಣಬಹುದು.
  ಇನ್ನೂ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ ಉಪೇಂದ್ರ ಕುಮಾರ್, ಚಿತ್ರದಲ್ಲಿ 5 ಹಾಡುಗಳಿದ್ದು ಬಹುತೇಕ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ ಚಿ ಉದಯ ಶಂಕರ್. ಎಸ್.ಪಿ. ಬಾಲಸುಬ್ರಹ್ಮಣ್ಯಂ, ಮಂಜುಳ ಗುರುರಾಜ್ ಜೊತೆಗೆ ಡಾ. ರಾಜ್‍ಕುಮಾರ್ ಚಿತ್ರದ ಒಂದು ಹಾಡಿಗೆ ತಮ್ಮ ಮಧುರವಾದ ಕಂಠವನ್ನು ನೀಡಿದ್ದಾರೆ. ಚಿತ್ರದ ಹಾಡುಗಳು ಸುಮಧುರವಾಗಿ ಮೂಡಿಬಂದಿವೆ.
  1991ರಲ್ಲಿ ಬಿಡುಗಡೆಯಾದ ಹೃದಯ ಹಾಡಿತು ಚಿತ್ರಕ್ಕೆ ಕರ್ನಾಟಕ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ, ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್‍ಗೆ ಸಂದಿತ್ತು ಮತ್ತು ಡಾ. ರಾಜ್ ಕುಮಾರ್ ಹಾಡಿದ ನಲಿಯುತಾ ಹೃದಯ ಹಾಡನು ಹಾಡಿದೆ ಹಾಡು ಎಲ್ಲರ ಬಾಯಲ್ಲೂ ಹರಿದಾಡುವಂತೆ ಮಾಡಿತು. ಇದೂ ಹೆಚ್ಚೂ ಪ್ರೇಕ್ಷಕರನ್ನು ಮುಟ್ಟಿತ್ತು. ಒಂದು ಯಶಸ್ವಿ ಚಿತ್ರ ಹೃದಯ ಹಾಡಿತು ಚಿತ್ರ.
  ಹೃದಯ ಹಾಡಿತು ಚಿತ್ರ ಹಾರ್ಟ್ ಪೇಷಂಟ್ ಮತ್ತು ಡಾಕ್ಟರ್ ನಡುವೆ ನಡೆಯುವ ಪ್ರೇಮ ಕಥೆ ಅದರ ಸವಿಯಾದ ದೃಶ್ಯಗಳನ್ನ  ನೋಡ್ಬೇಕು ಅಂದ್ರೆ ನೀವು ಚಿತ್ರವನ್ನೇ ನೋಡ್ಬೇಕು. 
ಮಂಜುನಾಥ್ ಹೆಚ್.ಆರ್.



ಶನಿವಾರ, ಜುಲೈ 2, 2016

ಬಹದ್ದೂರ್ ಗಂಡು


  ಬಹದ್ದೂರ್ ಗಂಡು ಚಿತ್ರ ಕಥೆಯಲ್ಲಾಗಲಿ, ಆ ಚಿತ್ರದಲ್ಲಿ ನಟಿಸಿದ ನಟರಲ್ಲಾಗಲಿ, ಯಾವುದೇ ವಿಷಯವನ್ನ ತೆಗೆದುಕೊಂಡ್ರು ಬದಲಾವಣೆಯನ್ನ ಬಯಸಿದ ಕನ್ನಡ ಸಿನಿ ಪ್ರಿಯನಿಗೆ ಇಷ್ಟವಾಗುವ ರೀತಿಯಲ್ಲಿ ಮೂಡಬಂದಿತ್ತು. ರಾಜ ಸಂಸ್ಥಾನ ಮತ್ತು ಪ್ರಜೆಗಳ ನಡುವಿನ ಸಮರಸದ ಭಾವನೆಯನ್ನು ಮೂಡುವ ಮನಂರಜನೆ, ಪ್ರೀತಿ, ಪ್ರೇಮ, ಮತ್ತು ಹಾಸ್ಯವನ್ನ ಈ ಚಿತ್ರದಲ್ಲಿ ಕಾಣಬಹುದು.
  ಬಹದ್ದೂರ್ ಗಂಡು ಚಿತ್ರದಲ್ಲಿ ದೊಡ್ಡ ತಾರಾಬಳಗದ ದಂಡೇ ಇದೆ. ರಾಜ್ ಕುಮಾರ್ ಜೊತೆಗೆ ಆರತಿ ಮತ್ತು ಜಯಂತಿ ನಾಯಕಿಯಾಗಿ ಕಾಣಿಸಿಕೊಂಡ್ರೆ, ಖಳ ನಟನಾಗಿ ವಜ್ರಮುನಿ ಎಲ್ಲರ ಮಾತುಗಳಲ್ಲಿ ಹರಿದಾಡುವಂತೆ ಮಾಡಿದ್ದಾರೆ. ಪೋಷಕನ ಪಾತ್ರದಲ್ಲಿ ಬಾಲಕೃಷ್ಣನ ಅಭಿನಯ ಎಂತಹವರು ನೆನಪು ಮಾಡಿಕೊಳ್ಳುವಂತೆ ಮಾಡುತ್ತೆ. ಉಳಿದಂತೆ ದ್ವಾರಕೀಶ್, ತೂಗುದೀಪ ಶ್ರೀನಿವಾಸ್, ರಾಜಶಂಕರ್ ಅಭಿನಯ ಚಿತ್ರದಲ್ಲಿ ಚೆನ್ನಾಗಿ ಮೂಡಿಬಂದಿದೆ.
  ಆಗ ಚಿತ್ರಗಳಿಗೆ ಸಂಗೀತ ನೀಡುವುದರಲ್ಲಿ ಹೆಚ್ಚು ಗುರುತಿಸಿಕೊಂಡಿದ್ದ ಎಂ. ರಂಗರಾಜನ್  ಬಹದ್ದೂರ್ ಗಂಡು ಚಿತ್ರಕ್ಕೆ ಕೂಡ ಸಂಗೀತ ನೀಡಿದ್ರು. ಈ ಚಿತ್ರದ ಎಲ್ಲಾ ಹಾಡುಗಳಿಗೆ ಸಾಹಿತ್ಯ ಬರೆದವರು ಚಿ. ಉದಯಶಂಕರ್, ಚಿತ್ರ ಸಾಹಿತ್ಯ ಬರೆಯುವುದರಲ್ಲಿ ಎತ್ತಿದ ಕೈ ಆಗಿದ್ದ ಇವರಿಗೆ ಹೆಚ್ಚು ಹೇಳಲೇ ಬೇಕಿಲ್ಲ. ಪಿ.ಬಿ ಶ್ರೀನಿವಾಸ್, ಎಸ್. ಜಾನಕಿ, ಎಸ್.ಪಿ ಬಾಲಸುಬ್ರಹ್ಮಣ್ಯಂ ಮತ್ತು ರಾಜ್ ಕುಮಾರ್ ಕೂಡ ಚಿತ್ರದಲ್ಲಿ ಹಾಡಿಗೆ ದ್ವನಿ ನೀಡಿದ್ದಾರೆ.
  ಒಂದು ಚಿತ್ರ ಅಚ್ಚು ಕಟ್ಟಾಗಿ, ಸುಂದರವಾಗಿ ಮೂಡಿಬರಬೇಕಾದರೆ, ಛಾಯಾಗ್ರಹಣದ ಕೈ ಚಳಕ ತುಂಬಾನೇ ಮುಖ್ಯವಾಗಿರುತ್ತೆ, ಈ ಚಿತ್ರಕ್ಕಾಗಿ ಕೈಯಲ್ಲಿ ಕ್ಯಾಮರ ಹಿಡಿದವರು ಎಸ್.ವಿ ಶ್ರೀಕಾಂತ್, ಇವರ ಸೃಜನಶೀಲ ಕ್ಯಾಮರ ವರ್ಕ್‍ನಿಂದ ಚಿತ್ರ ಅದ್ಬುತವಾಗಿ ಮೂಡಿಬಂದಿದೆ. ಕುದುರೆ ಸವಾರಿಯಲ್ಲಿನ ಸನ್ನಿವೇಶ, ನದಿ ದಾಟುವ ಸನ್ನಿವೇಶ ಮತ್ತು ಯುದ್ಧದ ಸನ್ನಿವೇಶಗಳು ಚಿತ್ರ ಯಶಸ್ಸಿಗೆ ಉದಾಹರಣೆಯ ಅಂಶಗಳು.
  ಬಹದ್ದೂರ್ ಗಂಡು ಚಿತ್ರ ನಿರ್ದೇಶನ ಮಾಡಿದವರು ಎ.ವಿ. ಶೇಷಗಿರಿ ರಾವ್, ಇವರ ಜೊತೆಗೆ ಚಿತ್ರಕಥೆಯನ್ನು ಬರೆದಿದ್ದಾರೆ ಚಿ ಉದಯಶಂಕರ್. ಇಂತ ಚಿತ್ರಕ್ಕೆ ಬಂಡವಾಳವನ್ನ ಹೂಡಿದ್ದಾರೆ ಶ್ರೀ ಕಾಂತ್ ನಹತಾ. ಬಹದ್ದೂರ್ ಗಂಡು ಚಿತ್ರ 1952ರಲ್ಲಿ ಹಿಂದಿ ಮತ್ತು ಉರ್ದು ಭಾಷೆಯಲ್ಲಿ ತೆರೆ ಕಂಡ ‘ಆನ್’ ಚಿತ್ರದಿಂದ ಸ್ಪೂರ್ತಿ ಪಡೆದ ಚಿತ್ರ, ಈ ಚಿತ್ರದಲ್ಲಿ ದಿಲೀಪ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಮಂಜುನಾಥ ಹೆಚ್.ಆರ್.

ಮನೆ ದೇವ್ರು


  ಕೆ. ಭಾಗ್ಯರಾಜ್ ಕಥೆ ಬರೆದು ವಿ ರವಿಚಂದ್ರನ್ ಚಿತ್ರ ಕಥೆ ನಿರ್ದೇಶನವನ್ನು ಮಾಡಿದ ಚಿತ್ರ ಮನೆ ದೇವ್ರು. ಈ ಚಿತ್ರ ಸಂಪೂರ್ಣ ಕೌಟುಂಬಿಕ ಪ್ರದಾನವಾದದ್ದು. ಗಂಡ ಹೆಂಡತಿ ನಡುವಿನ ಸಣ್ಣ ವಿಚಾರವಾಗಿ ಬೇರೆಯಾಗುವ, ಗಂಡ ಹೆಂಡತಿಯರ ವಾಸ್ತವದ ಕಥೆಯನ್ನು ಬಿಂಬಿಸುತ್ತಿತ್ತು ಮನೆ ದೇವ್ರು ಚಿತ್ರ. ಈ ಚಿತ್ರದ ಈ ಹಾಡು ಮಧುರವಾಗಿದ್ದು ಕೇಳುಗರ ತಲೆ ದೂಗುವಂತೆ ಮಾಡುತ್ತದೆ.
 ಮನೆ ದೇವ್ರು ಚಿತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ನಾಯಕ ನಾಯಕನಾಗಿ ಅಭಿನಯಿಸಿದ್ರೆ ಇವರಿಗೆ ಜೋಡಿಯಾಗಿ ಸುಧಾರಾಣಿ ನಾಯಕಿಯಾಗಿ ಅಭಿನಯಿಸಿದ್ರು. ಅದು ಅಲ್ಲದೆ ಇವರು ಜೊತೆಯಾಗಿ ಅಭಿನಯಿಸಿದ ಮೊದಲ ಚಿತ್ರ ಕೂಡ ಇದು. ಇವರಲ್ಲದೆ ಕೆ.ಎಸ್. ಅಶ್ವತ್, ಟೆನ್ನಿಸ್ ಕೃಷ್ಣ, ಉಮೇಶ್, ಸತ್ಯಜಿತ್, ಕಾಶಿ ಮೊದಲಾದ ತಾರಾಗಣವನ್ನ ಚಿತ್ರದಲ್ಲಿ ನೋಡಬಹುದು. ರವಿ ಚಂದ್ರನ್ ಮತ್ತು ಹಂಸಲೇಖ ಜೋಡಿ ಅಂದ್ರೆ ಅಲ್ಲಿ ಸಂಗೀತದ ಹಬ್ಬ ಇರುತ್ತೆ, ಸುಮಧುರ ಗೀತೆಗಳ ಅನಾವರಣ ಅವರಿಂದ ಆಗುತ್ತೆ. ಸಂಗೀತದ ಮ್ಯಾಜಿಕ್ ಕಂಡಿತಾ ಆಗೋದಂತು ನಿಜ. ಮನೆ ದೇವ್ರು ಚಿತ್ರದಲ್ಲೂ ಕೂಡ ಇದೇ ರೀತಿ ಇಂಪಾದ ಗೀತೆಗಳ ಹೊನಲನ್ನ ಚೆಲ್ಲಿದ್ದಾರೆ ಹಂಸಲೇಖ ಇದಕ್ಕೆ ರವಿಚಂದ್ರನ್‍ರ ಸಾಥ್ ಕೂಡ ಇರೋದನ್ನ ಚಿತ್ರದಲ್ಲಿ ನೋಡ್ಬೋದು.
 ಇನ್ನೂ ಈ ಚಿತ್ರದಲ್ಲಿ ಇರೋದು 7 ಹಾಡುಗಳು ಒಂದಕ್ಕಿಂತ ಮತ್ತೊಂದು ವಿಭಿನ್ನ ವಿಚಿತ್ರ, ಹಾಗೂ ವಿಶೇಷವಾಗಿ ಮೂಡಿಬಂದಿವೆ. ಈ ಎಲ್ಲಾ ಹಾಡುಗಳಿಗೆ ತಮ್ಮ ಸುಮಧುರ ಕಂಠ ನೀಡಿದ್ದಾರೆ ಎಸ್.ಪಿ. ಬಾಲಸುಬ್ರಹ್ಮಣ್ಯಂ. ಇವರ ಜೊತೆಗೆ ಎಸ್ ಜಾನಕಿ, ಮಾನೋ, ಕೆ. ಎಸ್ ಚೈತ್ರ ಕೂಡ ತಮ್ಮ ಧ್ವನಿ ಗೂಡಿಸಿದ್ದಾರೆ. ಸುಮಧುರ ಹಾಡುಗಳನ್ನ ನೀಡುವುದಕ್ಕೆ ಅನುಕೂಲವನ್ನು ಮಾಡಿಕೊಟ್ಟಿದೆ.
 ಮನೆ ದೇವ್ರು ಚಿತ್ರಕ್ಕೆ ಕ್ಯಾಮರಾ ಹಿಡಿದವರು ಜಿ.ಎಸ್.ವಿ ಸಿತಾರಾಂ, ಕೌಟುಂಬಿಕ ಪ್ರದಾನ ಈ ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಮರೆಯುವ ಹಾಗಿಲ್ಲ ಹಾಗೆ ತಮ್ಮ ಜವಾಬ್ದಾರಿಯನ್ನ ನಿಭಾಯಿಸಿದ್ದಾರೆ. ಸಂಕಲನಕಾರನಾಗಿ ಕೆ. ಬಾಲು ಚಿತ್ರದ ಸಂಪೂರ್ಣ ಚಿತ್ರಣವನ್ನು ನೀಡುವಂತೆ ಮಾಡಿದ್ದಾರೆ. ಇವರೆಲ್ಲರ ಪರಿಶ್ರಮ ಮನೆ ದೇವ್ರು ಚಿತ್ರ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ನಿರ್ದೇಶಕ ವಿ. ರವಿಚಂದ್ರನ್ ಪಾತ್ರ ಕೂಡ ಮನೋಜ್ಞವಾಗಿ ಮೂಡಿಬಂದಿದೆ.
ಮಂಜುನಾಥ್ ಹೆಚ್.ಆರ್.